Posts

Showing posts from June, 2019

"" ಓ ಮನಸೇ ಮರುಗದಿರು ""

Image
             ಮನಸ್ಸೆಂಬುದು ಒಂದು ಕನ್ನಡಿಯಿದ್ದಂತೆ.ಒಂದು ಕನ್ನಡಿ ಹೇಗೆ ಬಿದ್ದಾಗ ಛಿದ್ರ ಗೊಳ್ಳುತ್ತದೆಯೋ ಹಾಗೆಯೇ ಮನಸ್ಸೆಂಬ ಕನ್ನಡಿಯು ಕೆಲವೊಮ್ಮೆ ಬುದ್ದಿಯೀನ ವ್ಯಕ್ತಿಗಳಾಡುವ ಕೆಲ ಮಾತುಗಳ ಬಲೆಗೆ ಸಿಲುಕಿ ಭಿನ್ನವಾಗುತ್ತದೆ.ಈಗೆ ಭಿನ್ನವಾದ ಮನಸ್ಸು ಮೌನದ ಆಸರೆ ಬೇಡುತ್ತದೆ.ಈಗೆ ಮೌನದ ಆಸರೆಗೆ ಒಳಗಾದ ವ್ಯಕ್ತಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟಕರ ಸಂಗತಿ.ಯಾಕೆಂದರೆ ನಾವು ಇನ್ನೊಬ್ಬರು ನೋವಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ.ಆದರೆ ಅದೇ ಸಂಗತಿ ನಮಗೆ ಬಂದಾಗ ಮಾತ್ರ ನಾವು ಅವರಿಗೆ ತಿಳಿ ಹೇಳಿದ ನೆನಪು ಮರುಕಳಿಸುತ್ತದೆ.ನಮಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದೆ .ಆದರೆ ಅದೇ ಸಮಯ ನಮಗೆ ಬಂದಾಗ ಯಾರು ಎಷ್ಟೇ ಹೇಳಿದರು ಅದನ್ನು ಅರಗಿಸಿಕೊಳ್ಳಲಾಗದ ನೋವು ಮನದಲ್ಲಿರುತ್ತದೆ.ಆದರೆ ಇಲ್ಲಿ ಎಲ್ಲದಕ್ಕೂ ಇರುವುದು ಮರುಗುವುದೊಂದೆ.         ಒಂದು ಮಾತು ಮಿತ್ರರೆ‌ ,ನಾವು ಯಾಕೆ ಮರುಗಬೇಕು,ಅವರ ಕಷ್ಟಗಳನ್ನು ನೋಡಿ ಯಾಕೆ ನೀರಾಗಬೇಕು.ಹಾಗಂದ ಮಾತ್ರಕ್ಕೆ ನಾವು ಬೇರೆಯವರ ಕಷ್ಟಗಳಿಗೆ ಸ್ಪಂದಿಸಬಾರದು ಅಂತಲ್ಲ.ಅದಕ್ಕೂ ಮುನ್ನ ನಾವು ಅವರಲ್ಲಿರುವ ಅಂತರಂಗದ ಕುರುಹುಗಳನ್ನು ಗಮನಿಸಿ ಅದಕ್ಕೆ ಸ್ಪಂದಿಸಬೇಕು.ಯಾಕೆಂದರೆ ಒಬ್ಬ ವ್ಯಕ್ತಿ ಎಡವಿ ಬಿದ್ದಾಗ, ಹೇಗೆ ಬಿದ್ದ ಜಾಗದಿಂದಲೇ ಎದ್ದು ಮೇಲೆ ಬರುತ್ತಾನೋ ಹ...

"" ಸ್ಫೂರ್ತಿಧಾಯಕ ಜೀವನ """" ಅದುವೇ ಮಾನವನ ಸಾಧನ ""

Image
  ''"ಸಾಧನೆ ಇಲ್ಲದ ಜೀವನ - ರೆಕ್ಕೆಯಿಲ್ಲದ ಪಕ್ಷಿಯಂತೆ""   ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಆ ದೇವರು ಒಂದು ಉಚಿತವಾದ  ಅನ್ ಲಿಮಿಟೆಡ್  ಮೆಮೋರಿ ಕಾರ್ಡ್ ಕೊಡ್ತಾನೆ.ಆದರೆ ಅದನ್ನು ಕೆಲವರು ತಮ್ಮ ತಮ್ಮ ಜೀವನ ಶೈಲಿಗೆ ತಕ್ಕಂತೆ ಬಳಸುತ್ತಾರೆ.ಇದರಲ್ಲಿ ಮುಖ್ಯ ವಿಚಾರವೇನೆಂದರೆ ಎಲ್ಲರೂ ಹೊಂದಿರುವ ಮೆಮೋರಿಯಲ್ಲಿ ಸಾಕಷ್ಟು ಬೇರೆ ಬೇರೆ  ವಿಚಾರಗಳನ್ನು ಹಿಡಿದಿಟ್ಟಿದ್ದರು ಅವುಗಳ ಮೂಲ ಪರಿಕಲ್ಪನೆ ಒಂದೇ ಆಗಿರುತ್ತದೆ ಅದುವೇ ಜೀವನ.       ಈ ಜೀವನದಲ್ಲೂ ಸಹ ಒಂದು ಪೆಂಡ್ರೈವ್ ಕೊಟ್ಟಿರುತ್ತಾನೆ ಅದುವೇ ನಮ್ಮ ಮನಸ್ಸು(ಆತ್ಮ ಸಾಕ್ಷಿ). ನೋಡಿ ಮಿತ್ರರೇ ಈ ಜೀವನ ಎಂಬುದು ನಶ್ವರ.ಇಲ್ಲಿ ಇಂದು ಜನಿಸಿ,ನಾಳೆ ಬದುಕಿ,ನಾಡಿದ್ದು ಅಳಿದು ಹೋಗಬೇಕು ಹಾಗಿರುವಾಗ ಇಲ್ಲಿ ,ನಾನು ,ನಂದು,ಅನ್ನೋದು ನೆಪಮಾತ್ರ.ಯಾಕೆಂದರೆ ಆ ದೇವರಿಂದ ನಮಗೆ ಸಾವಿನ ಕರೆ ಯಾವಾಗ ಬೇಕಾದರೂ ಬರಬಹುದು. ಮತ್ತು ಸಾವು ಬರುವುದೆಂಬ ಭಯದಲ್ಲಿ ನಾವು ಎಲ್ಲೇ ಅಡಗಿ ಕುಳಿತರು,ಆ ವಿಧಿ ನಮ್ಮನ್ನು ಹಿಂಬಾಲಿಸಿಯೇ ತೀರುತ್ತದೆ.ಇದು ತಿಳಿದಿದ್ದರು ಕೆಲವರು ತಾವು ಭೂಮಿಯ ಮೇಲೆ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇಲ್ಲಿಯೇ ಇರುತ್ತೇವೆ ಎಂಬಂತೆ ವರ್ತಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ತಾನು ಸತ್ತ ಮೇಲೆ ತನ್ನ ಕೈಗಳನ್ನು ಮೇಲೆ ಮಾಡಿ ಮಣ್ಣು ಮಾಡಿ ಎಂದಿದ್ದನಂತೆ.ಕಾರಣ ಇಷ್ಟ...