Posts

Showing posts from 2019

MANCHIBEEDU HISTORY

Image
This version is English. Kannada version also available. Manchibeedu and Manchibeed inscriptions on the history pages.  The tallest beach is Manchibeedu.  As the name suggests, the flowers in the past were growing here, gradually transforming into the same munchidade.  Village: - Manchibeedu  Taluk: - KR Pate  District: - Mandya.  State: - Karnataka  History of Manchibeedu: - Statute No. 84  Village - - Manchibeedu  Location - Near Ishwar Temple.  Period - - AD  About the 11th century.  Script and Language - Kannada  Report Announcement - AKSA / SHS .೧೭ / Page .೧೩ /  Summary - The inscription refers to the paradise of Kaliviamma Madiwalla Nagyannanna of Thiruvarikku, who killed the robbers in the battle of Thurukku.  Manchibeedu Statute No: 85  The village.  : Manchibeedu  Location.  : Near Ishwar Temple  Period: AD 1379 October 12 Script...

ಭಾರತದ ಸಂವಿಧಾನದ ವಿಧಿಗಳು

Image
ಭಾರತದ ಸಂವಿಧಾನದ ವಿಧಿಗಳು : ಭಾರತ ಸಂವಿಧಾನ ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 1ಒಕ್ಕೂಟದ ಹೆಸರು 2ನೂತನ ರಾಜ್ಯಗಳ ರಚನೆ 3ಸರಹದ್ದುಗಳು ಭಾಗ -2 5ಪೌರತ್ವ 6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು . 7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು ಭಾಗ -3 ( ಮೂಲಭೂತ ಹಕ್ಕುಗಳು ) 14ಸಮಾನೆತೆಯ ಹಕ್ಕು 15ತಾರತಮ್ಯ ನಿಷೇಧ 16 ಉದ್ಯೋಗದಲ್ಲಿ ಸಮಾನತೆ 17ಅಸ್ಪ್ರಶ್ಯತೆ ನಿರ್ಮೊಲನೆ 18ಬಿರುಡುಗಳ ರದ್ದತಿ 19 6 ಸ್ವಾತಂತ್ರ್ಯಗಳು 20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ 21ಜೀವಿಸುವ ಹಕ್ಕು 21(“ಎ) ವಿದ್ಯಾಭ್ಯಾಸದ ಹಕ್ಕು 23ಮಾನವ ಮಾರಾಟ , ಬಲವಂತ ದುಡಿಮೆ 24ಬಾಲಕಾ… ಕ ನಿಷೇಧ 25ಧಾರ್ಮಿಕ ಆಚರಣೆ 26ಧಾರ್ಮಿಕ ಸ್ವಾತಂತ್ರ್ಯ 27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ : ಭಾಗ-4(ಎ) ಮೂಲಭೂತ ಕರ್ತವ್ಯಗಳು 51(ಎ)11ಮೂಲಭೂತ ಕರ್ತವ್ಯಗಳು ಭಾಗ -5(ಕೇಂದ್ರ ಸರ್ಕಾರ ) 52 ರಾಷ್ಪಪತಿ 54ರಾಷ್ಪಪತಿ ಚುನಾವಣೆ 58ರಾಷ್ಪಪತಿಯ ಅರ್ಹತೆಗಳು 60ರಾಷ್ಪಪತಿಯ ಪ್ರಮಾಣ ವಚನ 61 ಮಹಾಭಿಯೋಗ 63ಉಪರಾಷ್ಪಪತಿ 67ಉಪರಾಷ್ಪಪತಿ ಪದವಧಿ 72ರಾಷ್ಪಪತಿ ಕ್ಷಮಾಧಾನ 74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು 75ಪ್ರಧಾನಿ ಮಂತ್ರಿಮಂಡಲದ ನೇಮಕ 76ಅ ….ಜನರಲ್ 79 ಸಂಸತ್ತಿನ ರಚನೆ 80 ರಾ...

ಶ್ರೀ ಕ್ಷೇತ್ರ ಚಂದಗೋನಹಳ್ಳಿಯಮ್ಮ.

Image

"" ಓ ಮನಸೇ ಮರುಗದಿರು ""

Image
             ಮನಸ್ಸೆಂಬುದು ಒಂದು ಕನ್ನಡಿಯಿದ್ದಂತೆ.ಒಂದು ಕನ್ನಡಿ ಹೇಗೆ ಬಿದ್ದಾಗ ಛಿದ್ರ ಗೊಳ್ಳುತ್ತದೆಯೋ ಹಾಗೆಯೇ ಮನಸ್ಸೆಂಬ ಕನ್ನಡಿಯು ಕೆಲವೊಮ್ಮೆ ಬುದ್ದಿಯೀನ ವ್ಯಕ್ತಿಗಳಾಡುವ ಕೆಲ ಮಾತುಗಳ ಬಲೆಗೆ ಸಿಲುಕಿ ಭಿನ್ನವಾಗುತ್ತದೆ.ಈಗೆ ಭಿನ್ನವಾದ ಮನಸ್ಸು ಮೌನದ ಆಸರೆ ಬೇಡುತ್ತದೆ.ಈಗೆ ಮೌನದ ಆಸರೆಗೆ ಒಳಗಾದ ವ್ಯಕ್ತಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟಕರ ಸಂಗತಿ.ಯಾಕೆಂದರೆ ನಾವು ಇನ್ನೊಬ್ಬರು ನೋವಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ.ಆದರೆ ಅದೇ ಸಂಗತಿ ನಮಗೆ ಬಂದಾಗ ಮಾತ್ರ ನಾವು ಅವರಿಗೆ ತಿಳಿ ಹೇಳಿದ ನೆನಪು ಮರುಕಳಿಸುತ್ತದೆ.ನಮಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದೆ .ಆದರೆ ಅದೇ ಸಮಯ ನಮಗೆ ಬಂದಾಗ ಯಾರು ಎಷ್ಟೇ ಹೇಳಿದರು ಅದನ್ನು ಅರಗಿಸಿಕೊಳ್ಳಲಾಗದ ನೋವು ಮನದಲ್ಲಿರುತ್ತದೆ.ಆದರೆ ಇಲ್ಲಿ ಎಲ್ಲದಕ್ಕೂ ಇರುವುದು ಮರುಗುವುದೊಂದೆ.         ಒಂದು ಮಾತು ಮಿತ್ರರೆ‌ ,ನಾವು ಯಾಕೆ ಮರುಗಬೇಕು,ಅವರ ಕಷ್ಟಗಳನ್ನು ನೋಡಿ ಯಾಕೆ ನೀರಾಗಬೇಕು.ಹಾಗಂದ ಮಾತ್ರಕ್ಕೆ ನಾವು ಬೇರೆಯವರ ಕಷ್ಟಗಳಿಗೆ ಸ್ಪಂದಿಸಬಾರದು ಅಂತಲ್ಲ.ಅದಕ್ಕೂ ಮುನ್ನ ನಾವು ಅವರಲ್ಲಿರುವ ಅಂತರಂಗದ ಕುರುಹುಗಳನ್ನು ಗಮನಿಸಿ ಅದಕ್ಕೆ ಸ್ಪಂದಿಸಬೇಕು.ಯಾಕೆಂದರೆ ಒಬ್ಬ ವ್ಯಕ್ತಿ ಎಡವಿ ಬಿದ್ದಾಗ, ಹೇಗೆ ಬಿದ್ದ ಜಾಗದಿಂದಲೇ ಎದ್ದು ಮೇಲೆ ಬರುತ್ತಾನೋ ಹ...

"" ಸ್ಫೂರ್ತಿಧಾಯಕ ಜೀವನ """" ಅದುವೇ ಮಾನವನ ಸಾಧನ ""

Image
  ''"ಸಾಧನೆ ಇಲ್ಲದ ಜೀವನ - ರೆಕ್ಕೆಯಿಲ್ಲದ ಪಕ್ಷಿಯಂತೆ""   ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಆ ದೇವರು ಒಂದು ಉಚಿತವಾದ  ಅನ್ ಲಿಮಿಟೆಡ್  ಮೆಮೋರಿ ಕಾರ್ಡ್ ಕೊಡ್ತಾನೆ.ಆದರೆ ಅದನ್ನು ಕೆಲವರು ತಮ್ಮ ತಮ್ಮ ಜೀವನ ಶೈಲಿಗೆ ತಕ್ಕಂತೆ ಬಳಸುತ್ತಾರೆ.ಇದರಲ್ಲಿ ಮುಖ್ಯ ವಿಚಾರವೇನೆಂದರೆ ಎಲ್ಲರೂ ಹೊಂದಿರುವ ಮೆಮೋರಿಯಲ್ಲಿ ಸಾಕಷ್ಟು ಬೇರೆ ಬೇರೆ  ವಿಚಾರಗಳನ್ನು ಹಿಡಿದಿಟ್ಟಿದ್ದರು ಅವುಗಳ ಮೂಲ ಪರಿಕಲ್ಪನೆ ಒಂದೇ ಆಗಿರುತ್ತದೆ ಅದುವೇ ಜೀವನ.       ಈ ಜೀವನದಲ್ಲೂ ಸಹ ಒಂದು ಪೆಂಡ್ರೈವ್ ಕೊಟ್ಟಿರುತ್ತಾನೆ ಅದುವೇ ನಮ್ಮ ಮನಸ್ಸು(ಆತ್ಮ ಸಾಕ್ಷಿ). ನೋಡಿ ಮಿತ್ರರೇ ಈ ಜೀವನ ಎಂಬುದು ನಶ್ವರ.ಇಲ್ಲಿ ಇಂದು ಜನಿಸಿ,ನಾಳೆ ಬದುಕಿ,ನಾಡಿದ್ದು ಅಳಿದು ಹೋಗಬೇಕು ಹಾಗಿರುವಾಗ ಇಲ್ಲಿ ,ನಾನು ,ನಂದು,ಅನ್ನೋದು ನೆಪಮಾತ್ರ.ಯಾಕೆಂದರೆ ಆ ದೇವರಿಂದ ನಮಗೆ ಸಾವಿನ ಕರೆ ಯಾವಾಗ ಬೇಕಾದರೂ ಬರಬಹುದು. ಮತ್ತು ಸಾವು ಬರುವುದೆಂಬ ಭಯದಲ್ಲಿ ನಾವು ಎಲ್ಲೇ ಅಡಗಿ ಕುಳಿತರು,ಆ ವಿಧಿ ನಮ್ಮನ್ನು ಹಿಂಬಾಲಿಸಿಯೇ ತೀರುತ್ತದೆ.ಇದು ತಿಳಿದಿದ್ದರು ಕೆಲವರು ತಾವು ಭೂಮಿಯ ಮೇಲೆ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇಲ್ಲಿಯೇ ಇರುತ್ತೇವೆ ಎಂಬಂತೆ ವರ್ತಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ತಾನು ಸತ್ತ ಮೇಲೆ ತನ್ನ ಕೈಗಳನ್ನು ಮೇಲೆ ಮಾಡಿ ಮಣ್ಣು ಮಾಡಿ ಎಂದಿದ್ದನಂತೆ.ಕಾರಣ ಇಷ್ಟ...

""ಅಂಗವಿಕಲತೆ ಶಾಪವಲ್ಲ""

Image
              ಆರೋಗ್ಯವೇ ಸ್ವರ್ಗ,        ಅನಾರೋಗವೇ ನರಕ.       ಮಿತ್ರರೇ ಅಂಗವಿಕಲತೆ ಎಂಬುದು ಶಾಪವಲ್ಲ.ಕೇವಲ ಆಕಸ್ಮಿಕವಾಗಿ ದೈವದತ್ತವಾಗಿ ಬರುವಂತಹ ಒಂದು ಸ್ವಾಭಾವಿಕ ಗುಣ. ಈ ಪ್ರಪಂಚದಲ್ಲಿ ಸ್ರುಷ್ಟಿಸಲ್ಪಟ್ಟ ಪ್ರತಿಯೊಬ್ಬರಿಗೂ ಆ ದೇವರು ಒಂದಿಲ್ಲೊಂದು ನ್ಯೂನತೆಯನ್ನು ಕೊಟ್ಟು ಸ್ರುಷ್ಟಿಸುತ್ತಾನೆ.ಅದರಲ್ಲೂ ಕೆಲವರಿಗೆ ಆಂತರಿಕ ನ್ಯೂನತೆಗಳನ್ನು ಕೊಟ್ಟರೆ, ಕೆಲವರಿಗೆ  ಬಾಹ್ಯ ನ್ಯೂನತೆಗಳನ್ನು ಕೊಡುತ್ತಾನೆ.ಆದರೆ ಕೆಲವರು ತಮ್ಮಲ್ಲಿರುವ  ಆಂತರಿಕ ನ್ಯೂನತೆಗಳನ್ನು ಮರೆತು,ಬೇರೆಯವರ ಬಾಹ್ಯ ನ್ಯೂನತೆಗ ಕಡೆ ಗಮನಹರಿಸುತ್ತಾರೆ.ಕೆಲ ಸಂಧರ್ಭಗಳಲ್ಲಿ ಅಂಗವಿಕಲತೆ ಎಂಬುದು ದೈವದತ್ತವಾಗಿ ಬಾರದಿದ್ದರೂ ನಮ್ಮ ನಿರ್ಲಕ್ಷತೆ ಅಥವಾ ಬೇಜವಬ್ದಾರಿಯಿಂದ ಸಂಭವಿಸುತ್ತದೆ.      ಕೆಲ ಅವಿವೇಕಿಗಳು ಅಂಗವಿಕಲತೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದರೂ ,ಅವರ ಪೋಷಕರ ಜೊತೆಯಲ್ಲಿ ಅದರ ಬಗ್ಗೆಯೇ ಚರ್ಚಿಸಿ ಅವರ ಮನಸ್ಅನ್ನು ಘಾಸಿ ಗೊಳಿಸುತ್ತಾರೆ.  ಅಂಗವಿಕಲರನ್ನು ಕೇವಲವಾಗಿ ಕಾಣುತ್ತಾರೆ . ಮತ್ತು ಕೆಲವರು ಪ್ರಯಾಣದ ಸಂಧರ್ಭದಲ್ಲಿ ಅಂಗವಿಕಲರಿಗೆ ತಮ್ಮ ಆಸನಗಳನ್ನು ಮಾನವೀಯತೆಯಿಂದ ಬಿಟ್ಟು ಕೊಡುತ್ತಾರೆ.ಆದರೆ ಕೆಲವರಂತು ಅಂಗವಿಕಲರಿಗೆ ಮೀಸಲಿರುವ ಆಸನಗಳಲ್ಲಿ ಕುಳಿತಿದ್ದರೂ ಅವರುಗಳು ಬಂದರೂ ಆಸನಗಳನ್ನು ಬಿಟ್ಟು ...

"" ನನ್ನ ಮತ ನನ್ನ ಹಕ್ಕು ""

Image
                                             ನನ್ನ ಮಿತ್ರರೇ ಭಾರತವು ಒಂದು ಪ್ರಜಾ ಸತಾತ್ಮಕ ದೇಶ. ಮತ್ತು ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರು.ಎಲ್ಲಾ ಧರ್ಮಕ್ಕೂ ಸಮಾನ ಹಕ್ಕಿದೆ .ಮತ್ತು ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕಿವೆ.ಆ ಹಕ್ಕುಗಳಲ್ಲಿ ಬಹಳ ಮುಖ್ಯವಾದ  ಹಕ್ಕೆ ಮತದಾನದ ಹಕ್ಕು .ಇದರಿಂದ ನಾವು ನಮ್ಮನ್ನು ಕಾಯಲು ಬೇಕಾದಂತಹ ಸೇವಕರನ್ನು  ಅಥವಾ ಜನ  ಪ್ರತಿನಿಧಿಗನ್ನು ಆರಿಸಿ ಕೊಳ್ಳಲು ಎಲ್ಲರಿಗೂ ಅವಕಾಶರುತ್ತದೆ.ಈ ಮತದಾನದಿಂದ ಯಾವೊಬ್ಬ ಪ್ರಜೆಯು ಹಿಂದುಳಿಯಬಾರದು ಮತ್ತು  ಮತ ಚಲಾಯಿಸುವ ಪ್ರಜೆಯು ಸ್ವಂತ ಚಾಣಾಕ್ಷತನದಿಂದ ತಮಗೆ ಬೇಕಾದಂತಹ ಪ್ರತಿನಿಧಿಯನ್ನು ಆರಿಸಲು 18  ವರ್ಷ ತುಂಬಿದ ವಯಸ್ಕರಿಗೆ ಮಾತ್ರ ಅಧಿಕಾರ ಕೊಟ್ಟಿರುತ್ತದೆ . ಕಾರಣ ಆ ವ್ಯಕ್ತಿಗಳಿಗೆ ಎಲ್ಲದರ ಬಗ್ಗೆಯೂ ಅರಿವಿರುತ್ತದೆ ಎಂದು. ಭಾರತವು ಒಂದು ಪ್ರಜಾ ಪ್ರಭತ್ವ ರಾಷ್ಟ್ರ. ಹೆಸರೇ ಹೇಳುವಂತೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಪ್ರಭುವೆ!! . ಆದರೆ ಈ ಮಾತು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜಾರಿಯಲ್ಲಿದ್ದು ಆ ಸಮಯದಲ್ಲಿ ನಾವು ಆರಿಸಲ್ಪಡುವ ವ್ಯಕ್ತಿಗಳು ಅಥವಾ ಜನನಾಯಕರು ಸ್ವತಃ ಅವರೇ ಪ್ರಜೆಗಳಾಗಿ ನಮ್ಮನ್ನು ಪ್ರಭುಗಳ ರೀತಿಯಲ್ಲಿ ಕಾಣುತ್...

ಯಾರು ಏನ್ ಅನ್ಕೊಳ್ತಾರೋ ? !!!!!!

Image
   ಹಾಯ್ ಗೆಳೆಯರೆ  ಇದೊಂದು ಸ್ವಾರ್ಥಿ ಪ್ರಪಂಚ.ಇಲ್ಲಿ ಸಾಮಾನ್ಯ ಜನರು ಬದುಕಬೇಕೆಂದರೆ ಸಾಕಷ್ಟು ಸೆಣೆಸಾಡಬೇಕು. ಇಲ್ಲವಾದಲ್ಲಿ ಅವರು ತಟಸ್ಥ ಸ್ಥಿತಿಯಲ್ಲೆ ಇರಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವರಿಗೆ ನಾವು ಮುಂದೆಬರಬೇಕೆಂಬ ಆಸೆ ,ಹೆಬ್ಬಯಕೆ ಹೆಚ್ಚಿರುತ್ತದೆ.ಆದರೆ ಅವರ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಅದಕ್ಕೆ ತದ್ವಿರುದ್ಧವಾದ ಒಂದು ಯೋಚನೆ ಅವರ ಕನಸುಗಳನ್ನು ಭಗ್ನಗೋಳಿಸಲು ಸಿದ್ದವಾಗಿರುತ್ತದೆ ಅದೇ      "" ಯಾರು ಏನ್ ಅನ್ಕೊಳ್ತಾರೋ ""ಎಂಬುದು.       ನೋಡಿ ಮಿತ್ರರೇ ಯಾರು ಏನ್ ಅನ್ಕೊಂಡ್ರು ನಮಗೇನೂ ಈ ಪ್ರಪಂಚ ಯಾರು ಹೇಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ದೂರುತ್ತಾರೆ‌. ನಮ್ಮನನು ನೋಡಿ ಹತ್ತು ಜನ ಒಪ್ಪದಿದ್ದರೂ ಪರವಾಗಿಲ್ಲ, ಆದರೆ ನಾವು ಮಾಡುವ ಕೆಲಸ ನಮ್ಮ ಮನಸಾಕ್ಷಿ ಮೆಚ್ಚುವಂತಿರಬೇಕು.ನಮ್ಮ ಕೆಲಸವನ್ನು ಯಾರು  ಮೆಚ್ಚದಿದ್ದರೇನು ನಮಗೆ ನಾವೇ ಸಾಟಿ ಹೊರತು ಬೇರ್ಯಾರು ಇಲ್ಲ.        ಈ ಪ್ರಪಂಚದಲ್ಲಿ ನಾವು ನೆಲೆಯೂರಿ ಬದುಕಬೇಂಕೆದರೆ  ಅದಕ್ಕೆ ನಮ್ಮ ಮನಸ್ಸಾಕ್ಷಿ ಮತ್ತು ನಮ್ಮ ದುಡಿಮೆಯಿಂದಲೇ ಸಾಧ್ಯ .ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಿಂದ  ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ನಾವು ಇನ್ನೋಬ್ಬರ ಅಂಜಿಕೆಯಿಂದಲೇ ಆಗುವ ಕೆಲಸವನ್ನು ನಮ್ಮಿಂದ ನಾವೇ  ಹಾಳುಮಾಡಿಬಿಡುತ್ತೇವೆ. ನಮ್ಮ ಕಷ್ಟ ...