Posts

ಹುಟ್ಟು ಹಬ್ಬದ ಸುಮಧುರ ಕ್ಷಣಗಳು

Image
       ನನ್ನ ಹುಟ್ಟು ಹಬ್ಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶುಭಾಶಯಗಳನ್ನು ತಿಳಿಸಿದ ನನ್ನ ಎಲ್ಲಾ ಗೆಳೆಯ ,ಗೇಳತಿಯರು,ಹಿತೈಶಿಗಳಿಗೂ ನನ್ನ ನಮಸ್ಕಾರಗಳು.     ವಿಶೇಷವಾಗಿ ನನಗೆ ಸರ್ಪ್ರೈಸ್ ಕೊಟ್ಟ ನನ್ನ ಗೆಳಯರಿಗೂ ತುಂಬು ಹೃದಯದ ಧನ್ಯವಾದಗಳು.        ಹುಟ್ಟು ಉಚಿತ , ಸಾವು ಕಚಿತ.ನಾವು ಹುಟ್ಟಿರುವುದು ಏನನ್ನಾದರು ಸಾಧಿಸಲು.ಎಂದು ಕೊಂಡು ಮುನ್ನುಗ್ಗಿದ್ದರೆ ಅಭಿವೃದ್ದಿಯ ಪಥ ಸಿಗುತ್ತದೆ. ನಮ್ಮ ಹುಟ್ಟಿಗೆ ಒಂದು ಅರ್ಥ ಸಿಗಬೇಕೆಂದಿದ್ದರೆ ನಾವು ಬದುಕಿದ್ದಾಗಲೇ ಏನನ್ನಾದರು ಸಾಧಿಸಬೇಕು.ನಮ್ಮ ಹುಟ್ಟು ಹಬ್ಬದೊಂದಿಗೆ ಅದರ ನೆನಪಿಗಾಗಿ ಪ್ರತಿಯೊಬ್ಬರೂ ಒಂದೊದು ಗಿಡಗಳನ್ನು ನೆಟ್ಟು.ನಮ್ಮ ಹುಟ್ಟು ಹಬ್ಬದೊಂದಿಗೆ ನಿಸರ್ಗವನ್ನು ಕೂಡ ಅಭಿವೃದ್ದಿ ಪಡಿಸಬೇಕು ಎಂಬುದು ನನ್ನ ಆಶಯ.                                ಹರೀಶ್. ಎಂ.ಎಸ್. ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಂಡ ಸುಮಧುರ ಕ್ಷಣಗಳು.

ಅಪ್ಪನೆಂಬ ಕರುಣಾಮಯಿ : ಹರೀಶ್. ಎಂ.ಎಸ್.

Image
            ಅಪ್ಪ ಅಂದರೆ ಏನೋ ಒಂದು ರೀತಿ ಹರ್ಷ.ಅಪ್ಪನೊಬ್ಬ ಜೊತೆಯಲ್ಲಿದ್ದರೆ ಎಂತದ್ದೇ ಕಷ್ಟ ಎದುರಿಸಿ ಎಲ್ಲವನ್ನೂ ಪಡೆದುಕೊಳ್ಳುತ್ತೇವೆಂಬ ಆನೆ ಬಲ.ಪ್ರತಿಯೊಬ್ಬರ ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾಗಿರುತ್ತದೆ.ಅವರು ಎಂತದೇ ಪರಿಸ್ಥಿತಿ ಬಂದರೂ,ಏನನ್ನೇ ಎದುರಿಸಿದರು ಅದನ್ನು ನಮ್ಮ ಮುಂದೆ ವ್ಯಕ್ತಪಡಿಸದೆ ನಮ್ಮ ಸಂತೋಷಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿ ನಮಗಾಗಿ ಸದಾ ಹಸನ್ಮುಖಿಯಾಗಿರುತ್ತಾರೆ. ಏನೇ ಗಳಿಸಿದರೂ ಅದನ್ನು ನಮ್ಮ ಭವಿಷ್ಯಕ್ಕಾಗಿ ಮೀಸಲಿಡುತ್ತಾರೆ.ನಮ್ಮ ಮಕ್ಕಳು ಯಾರಿಗೂ ಏನೂ ಕಡಿಮೆ ಇಲ್ಲ,ನಮ್ಮ ಮಕ್ಕಳು ಯಾರ ಮುಂದೆನೂ ಕೈ ಚಾಚಬಾರದು ನಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಸೊಗಸಾಗಿ ರೂಪಿಸಬೇಕು ಎಂಬ ಮಹದಾಸೆಯುಳ್ಳ ಅರಸ.ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸುವ ಶಿಲ್ಪಿ. ಇದಕ್ಕೆ ನಾವು ಎಷ್ಟೇ ಋಣಿಯಾಗಿದ್ದರೂ ಸಾಲದು.ಅಪ್ಪನಿಗೆ ಎಷ್ಟೇ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸಿದರೂ ಸಾಲದು.    ಅಂತದ್ದೇ ಹಾದಿಯಲ್ಲಿ ನಡೆದುಕೊಂಡು ಬಂದವರಲ್ಲಿ ನನ್ನ ಅಪ್ಪ ಕೂಡ ಒಬ್ಬರು.ನಮ್ಮಪ್ಪನಿಗೆ ನಾವು ಮೂರು ಜನ ಮಕ್ಕಳು . ನನಗೆ ಇಬ್ಬರು ಅಕ್ಕಂದಿರು ಮೂರನೆಯವ ನಾನು.ಆದರೆ ನನ್ನಪ್ಪನಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ.ನನ್ನ ಪಾಲಿಗೆ ಅವರಿದ್ದರೆ ನಾನೇ ರಾಜ ಕುಮಾರ ಅನ್ನುವಷ್ಟು ಹೆಮ್ಮೆ.ಒಂದು ದಿನವೂ ನನಗೆ ಹೊಡೆದವರಲ್ಲ,ಬೈದವರಲ್ಲ,ಆದರೂ ಅವರನ್ನು ಕಂಡರೆ ಎಲ್ಲಿಲ್ಲದ ಭಯ.ಯಾಕಂ...

ಸಾಧನೆಯ ಸೂತ್ರಗಳು: ಹರೀಶ್. ಎಂ.ಎಸ್.

Image
                  ಸೋಲು,ನೋವು ,ಅವಮಾನ,ನಿರಾಸೆ,ದುಃಖ, ಖಿನ್ನತೆ, ಇವೆಲ್ಲ ನಮ್ಮ ಜೀವನದಲ್ಲಿ ಬಿರುಗಾಳಿಯಂತೆ ಬಂದು ಬೀಸಲು ಶುರು ಮಾಡ್ದೋ ಅಂದ್ರೆ ನಮಗೆ ಜೀವನವೇ ಬೇಡ ಅನ್ನಿಸ್ಬಿಡುತ್ತೆ.  ಆದರೆ ಒಂದು ಮಾತು, ಒಂದು ಮರಕ್ಕೆ ಮಾತಾಡೋಕೆ ಬರೊಲ್ಲ,ನೋಡೋಕೆ ಬರೊಲ್ಲ,ನಡೆಯೋಕೆ ಬರೊಲ್ಲ ,ಅದನ್ನು ನಾವು ಎಷ್ಟು ಬಾರಿ ಕತ್ತರಿಸಿದರು ಅದು ಮತ್ತೆ ಚಿಗುರುತ್ತೆ.ಮತ್ತೆ ಬೆಳೆಯುತ್ತೆ.ಅಂತದರಲ್ಲಿ ನಾವು ಮನುಷ್ಯರು ಮಾತಾಡೋಕೆ,ನೋಡೋಕೆ, ನಡೆಯೋಕೆ ಎಲ್ಲಾ ಬರುತ್ತೆ ಆದರೂ ಜೀವನದಲ್ಲಿ ಸೋತುಬಿಡ್ತೀವಿ.         ಯಾಕೆ ಈ ಸೋಲು.ನಮ್ಮಿಂದ ಏನೂ ಆಗಲ್ಲ,ನಾವು ಜೀವನದಲ್ಲಿ ಸೋತೋಗ್ಬಿಟ್ವಿ ಅಂತ ನಾವೇ ಅನ್ಕೊಂಡ್ಬಿಡ್ತೀವಿ.ನಿಮಗೊಂದು ವಿಷಯ ಗೊತ್ತಾ ,ಒಂದು ಬೆಕ್ಕು ಕನ್ನಡಿಯ ಮುಂದೆ ನಿಂತ್ಕೊಂಡು ಕನ್ನಡಿಯಲ್ಲಿ ತನ್ನ ಮುಖ ನೋಡ್ಕೊಂಡು ,ತನ್ನಷ್ಟಕ್ಕೆ ತಾನೇ ಹುಲಿ ಅನ್ಕೊಳ್ಳುತ್ತೆ.ಆದರೆ ಇವತ್ತು ಮನುಷ್ಯ ಕನ್ನಡಿಯ  ಮುಂದೆ ನಿಂತ್ಕೊಂಡು ಹಳೆಯದನ್ನೆಲ್ಲ ನೆನಪಿಸಿಕೊಂಡು ಅಳ್ತಾ ಇದ್ದಾನೆ.     ನೆನ್ನೆದು ನೆನ್ನೆಗೆ,ಈ ದಿನ ನಿಮ್ಮದೆ.ಇವತ್ತು ಜನ ನಮ್ಮನ್ನ ಅವಮಾನ ಮಾಡ್ತಾರೆ.ಕಿಂಡಲ್ ಮಾಡ್ತಾರೆ.ಆದರೆ ಜನಗಳು ಒಂದಲ್ಲ ಒಂದು ದಿನ ನೀವು ಸಾಧನೆ ಮಾಡಿದಾಗ ಇದೇ ಅವಮಾನ ಮಾಡಿದ ಜನ ನಮ್ಮನ್ನು ಸನ್ಮಾನ ಮಾಡ್ತಾರೆ.     ಸಾಧನೆ ಮಾಡೋದು ಅಷ್ಟ...

ತ್ಯಾಜ್ಯ ವಿಲೇವಾರಿ ಪ್ರತಿಯೊಬ್ಬರ ಕರ್ತವ್ಯ : ಹರೀಶ್.ಎಂ.ಎಸ್.

Image
        ಇಂದು ಪ್ರಪಂಚದಲ್ಲಿ ಹೆಚ್ಚುತ್ತಿರುವ ನಗರೀಕರಣದಿಂದ ದೊಡ್ಡ ನಗರಗಳು ಹಾಗೂ ಪಟ್ಟಣಗಳುಉಗಮ ತಾಳುತ್ತಿವೆ.ಇದರಿಂದ ದಿನೇ ದಿನೇ ತ್ಯಾಜ್ಯ / ಕಸದ ಸಮಸ್ಯೆ ಹೆಚ್ಚುತ್ತಿದೆ.ಇದರ ಬಗ್ಗೆ ಅರಿವಿಲ್ಲದ ನಾವು ಅದನ್ನು ಸೀಮಿತ ಸ್ಥಳದಲ್ಲಿ ಶೇಖರಿಸಿ ವಿಲೇವಾರಿ ಮಾಡದೆ ರಸ್ತೆ, ಸಾರ್ವಜನಿಕ ಸ್ಥಳ,ಹೀಗೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದೇವೆ.ಎಲ್ಲಿ ನೋಡಿದರೂ ಕಸ ರಾಶಿಯಾಗಿ ಕಾಣುತ್ತಿದ್ದು ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.ಇದಕ್ಕೆ ಮೂಲ ಕಾರಣ ನಮ್ಮ ಅಜ್ಞಾನ.      ನಾವು ದಿನನಿತ್ಯದ ಜೀವನದಲ್ಲಿ ನೋಡಿರಬಹುದು ಅದೆಷ್ಟೋ ನಾಗರಿಕರು,ಪಟ್ಟಣವಾಸಿಗಳು ತಾವು ಉಪಯೋಗಿಸುವ ವಸ್ತುಗಳನ್ನು ಉಪಯೋಗಿಸಿ ಅದರಿಂದ ಹೊರ ಬರುವ ತ್ಯಾಜ್ಯವನ್ನು ಒಂದೆಡೆ ಶೇಖರಿಸಿ ಅದನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಹಾಕುತ್ತಾರೆ.ಆದರೆ ಕೆಲವರು ಅಂದರೆ ಶೇಕಡ 70% ನಾಗರೀಕರು ಇದಕ್ಕೆ ವಿರುದ್ದವಾಗಿಯೇ ನಡೆದುಕೊಳ್ಳುತ್ತಿದ್ದಾರೆ.ಇದರಿಂದ ಇವರು ಎಲ್ಲೆಂದರಲ್ಲಿ ಎಸೆದ ಕಸ ವಾರಗಟ್ಟಲೇ , ತಿಂಗಳುಗಟ್ಟಲೇ,ಅಲ್ಲೇ ಉಳಿಯುತ್ತದೆ.ಆಗ ಇದು ಕೊಳೆತು ಸೊಳ್ಳೆ ,ನೊಣ ,ಜಿರಳೆ ಮುಂತಾದ ಕೀಟಗಳ ಉಗಮಸ್ಥಾನವಾಗುತ್ತದೆ .ಇದರಿಂದ ಕೆಟ್ಟ ವಾಸನೆ ಬಂದು ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.ಇದನ್ನು ತಡೆಯಲು ಪ್ರತಿಯೊಬ್ಬರು ಮನಸ್ಸು ಮಾಡಬೇಕು.ಇದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಿ ಎಲ್ಲರೂ ಇದರ ವಿರುದ್ದ ಹರಿಹಾಯಬೇಕು.ಇ...

ಸೆಲ್ಫೀ ಪ್ರಪಂಚ : ಹರೀಶ್. ಎಂ.ಎಸ್

Image
ಮಿತ್ರರೇ ಪ್ರಪಂಚ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ಇಲ್ಲಿರುವ ಜನರೂ ಕೂಡ ಬೆಳೆಯುತ್ತಿದ್ದಾರೆ.ಈಗಿನ ಪ್ರಪಂಚದ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದ್ದಾರೆ.ಈ ಬದಲಾವಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಸಾಧನವೇ ಮೊಬೈಲ್. ಈಗಿನ ಕಾಲದಲ್ಲಂತೂ ಎಂತಹ ಹದಿ ಹರೆಯದ ಹುಡುಗ/ ಹುಡುಗಿಯರಿಂದ ಹಿಡಿದು ಮುಪ್ಪಿನ ಅಂಚಿನಲ್ಲಿರುವ ಅಜ್ಜ/ ಅಜ್ಜಿಯವರ ಕೈಯಲ್ಲೂ ಈ ಮೊಬೈಲಿನದ್ದೇ ಸದ್ದು.  ಈ ಮೊಬೈಲ್ ಎಂದಾಕ್ಷಣ ನಮಗೆ ನೆನಪಾಗೋದು ನಾವು ದಿನನಿತ್ಯ ನಾವು ಉಪಯೋಗಿಸುವ ಫೇಸ್ ಬುಕ್ ,ವಾಟ್ಸ್ ಆ್ಯಪ್,ಮೆಸೆಂಜರ್,ಇನ್ಸ್ಟ್ರಾಗ್ರಾಮ್,ಹೈಕ್ ಇತ್ಯಾದಿ ಸಮೂಹ ಮಾಧ್ಯಮ ಸಾಧನಗಳು.ಕೆಲವರಂತು ಅದರ ದಾಸರಾಗಿರುತ್ತಾರೆ.ಅದಕ್ಕೆ ಫೋಟೋಸ್ ಅಪ್ ಲೋಡ್ ಮಾಡೋದು .ಆ ಕಡೆಯಿಂದ ಬರುವ ಲೈಕ್, ಮತ್ತು ಕಮೆಂಟ್ ಗಾಗಿ ಕಾಯೋದು.ಅದರಲ್ಲೂ ಕೆಲವರಿಗಂತೂ ಈ  ಸೆಲ್ಫಿಯದ್ದೇ ಹುಚ್ಚು .ಈ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಎಲ್ಲಿಲ್ಲದ ಹರಸಾಹಸ ಮಾಡ್ತಾರೆ. ಯಾವುದೋ ಒಂದು ಮಾಧ್ಯಮದ ವರದಿಯ ಪ್ರಕಾರ ಇಡೀ ಪ್ರಪಂಚದಲ್ಲಿ ಮುಪ್ಪಿನವರಿಗಿಂತ( ಮುದಿ ವಯಸ್ಸಿನವರಿಗಿಂತ) ಹೆಚ್ಚು ಫ್ರೌಡಾವಸ್ತೆ ಮತ್ತು ವಯಸ್ಸಿನ ಯುವಕರೆ ಸಾವಿಗೀಡಾಗುತ್ತಿದ್ದಾರೆ  ಇದಕ್ಕೆ ಕಾರಣ ಈ ಮೋಬೈಲ್ ಎಂಬ ಮಹಾ ಮಾಯೇ ಅದರಲ್ಲಿರುವ ಸೆಲ್ಫಿಯ ಛಾಯೆ. ಉದಾಹರಣೆಗೆ : 1:  ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಾರಿಯನ್ನು ನೋಡದೆ ಸಂಪೂರ್ಣವಾಗಿ ಮೊಬೈಲ್ ನಲ್ಲಿರುವ ಫೇಸ್ ಬುಕ್ ,ವ...

ಬದುಕೆಂಬ ಬವಣೆಯೊಳಗೆ ‌ : ಹರೀಶ್. ಎಂ.ಎಸ್.

Image
      ಗೆಳೆಯರೆ ಇದೊಂದು ಸ್ಪರ್ಧಾ ಜಗತ್ತು ಇಲ್ಲಿ ಜನಸಾಮಾನ್ಯರು ಮುಂದೆ ಬರಲು ಅದೆಷ್ಟೋ ಕಸರತ್ತು ನಡೆಸುತ್ತಾರೆ.ಆದರೂ ಕೆಲ ಜಾಗಗಳಲ್ಲಿ ಎಡವುತ್ತಾರೆ.ಇದಕ್ಕೆ ಕಾರಣ ಅವರಲ್ಲಿರುವ ಆತ್ಮ ಸ್ಥೈರ್ಯ  ಕುಗ್ಗುವುದು.ಅವರ ಮೇಲೆ ಅವರಿಗೇನೆ ಅಪ ನಂಬಿಕೆ ಮೂಡುವುದು.                        ಆದ್ದರಿಂದ ಯಾರೂ ಸಹ ನಾವು ಕೈಲಾಗದವರು ,,,ನಮ್ಮ ಕೈಲೇನಾದೀತು ಎಂದು ಊಹಿಸಿ ಕೊಳ್ಳಬೇಡಿ ಒಂದು ವೇಳೆ ನೀವು ಹಾಗೇನಾದರು ಊಹಿಸಿಕೊಂಡರೆ ,,ಊಹಿಸಿಕೊಂಡಂತೆಯೇ ಆಗಿ ಬಿಡುತ್ತೀರ .ಮೊದಲು ನಿಮ್ಮ ಮೇಲೆ ನೀವು ವಿಶ್ವಾಸವಿಡಿ ತಾವುಗಳು ಎಲ್ಲವನ್ನು ಸಾಧಿಸಬಲ್ಲೆವು ,ನಮ್ಮಿಂದ ಅಸಾಧ್ಯವಾದುದು ಏನು ಇಲ್ಲ ಎಂದು ಹೇಳುತ್ತಾ ಮುಂದೆ ಸಾಗಿ ಖಂಡಿತ ನೀವು ಅಂದು ಕೊಂಡಂತೆಯೇ ಸಾಧಿಸುತ್ತೀರಿ ಆಗ ಗೆಲುವು ನಿಮ್ಮದಾಗುತ್ತದೆ.     ಪ್ರಸ್ತುತ ಪ್ರಪಂಚದಲ್ಲಿ ಜನರು ತಮ್ಮ ತಮ್ಮ ಹೆಸರುಗಳನ್ನು ಸ್ಥಿರ ಸ್ಥಾಯಿಯಾಗಿ ಉಳಿಸಿಕೊಳ್ಳಲು , ಜನಸಾಮಾನ್ಯರಿಂದ ಹೊಗಳಿಸಿಕೊಳ್ಳಲು ,ಬೇರೆಯವರನ್ನು ತುಳಿದು ಬದುಕುವ ಜನರಿದ್ದಾರೆ ಅಂತವರಿಂದ ದೂರವಿದ್ದು ನೀವೇನೆಂಬುದನ್ನು ತೋರಿಸಿ.ಆಗ ತಮ್ಮ ಗೆಲುವನ್ನು ಕಂಡು ಅವರೇ ಬಾಲ ಮುದುರಿಕೊಳ್ಳುತ್ತಾರೆ. ಮತ್ತೊಮ್ಮೆ ಇನ್ನೊಬ್ಬರನ್ನು ತುಳಿಯುವ ಮುನ್ನ ಯೋಚಿಸುತ್ತಾರೆ.    ಕೆಲ ಸಮಯ ಸಂಧರ್ಭಗಳಲ್ಲಿ ಕೆಲ ಅವಿವ...

PHOTOS ALBUM OF HARISHA.MS

Image